Home > Articles > ಕುಮಾರವ್ಯಾಸ ಭಾರತದಲ�...
🔒 PDF Access Restricted Subscribe Free Plan (5 Articles)
Aray Journal | Research Article Published ARY2026C032ADE3
Volume 1 (2024) Issue 1 Article 4 of 5 Pages: 7-16

ಕುಮಾರವ್ಯಾಸ ಭಾರತದಲ್ಲಿ ಗೀತೋಪದೇಶ: ಒಂದು ತಾತ್ವಿಕ ವಿವೇಚನೆ

ಕುಮಾರವ್ಯಾಸ ಭಾರತದಲ್ಲಿ ಗೀತೋಪದೇಶ: ಒಂದು ತಾತ್ವಿಕ ವಿವೇಚನೆ

Author:

ಅಮರ್‌ ಬಿ. ಹೊಳೆಗದ್ದೆ

Keywords:
ವ್ಯಾಸ ಕುಮಾರವ್ಯಾಸ ಭಗವದ್ಗೀತೆ ಜಾತಿಶಂಕರ ಭಕ್ತಿ ವಿಶ್ವರೂಪದರ್ಶನ ಜನಪ್ರಿಯ ಕಾವ್ಯ ತತ್ತ್ವ ಜಿಜ್ಞಾಸೆ.

Abstract

Abstract not available for this article.

ಸಾರಾಂಶ

ಚಾರಿತ್ರಿಕವಾಗಿ ಬ್ರಾಹ್ಮಣ ಸಂಪ್ರದಾಯಗಳ ವೇದಾಂತ ದರ್ಶನದ ವ್ಯಾಖ್ಯಾನಗಳಲ್ಲಷ್ಟೇ ಪ್ರಮುಖ ಸ್ಥಾನವನ್ನು ಪಡೆದಿದ್ದ ಭಗವದ್ಗೀತೆಯು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಸಂದರ್ಭದಲ್ಲಿ ‘ಹಿಂದೂ ಧರ್ಮದ ಧರ್ಮಗ್ರಂಥ’ ಎನ್ನುವ ಸ್ಥಾನಕ್ಕೇರಿತು. ಕನ್ನಡ ಕಾವ್ಯ ಮತ್ತು ಶಾಸ್ತ್ರ ಪರಂಪರೆಗಳು ಕೂಡ ಭಗವದ್ಗೀತೆಗೆ ಮಹತ್ವದ ಸ್ಥಾನವನ್ನೇನೂ ನೀಡಿಲ್ಲ. ಹೀಗಿದ್ದೂ, ಕುಮಾರವ್ಯಾಸ ಭಾರತದಲ್ಲಿ ಒಂದು ಸುದೀರ್ಘಪ್ರಸ್ತಾವದಂತೆ ಕಾಣಿಸಿಕೊಳ್ಳುವ ಭಗವದ್ಗೀತೆಯು ಕುಮಾರವ್ಯಾಸನ ಕಾವ್ಯಚಿಂತನೆಯ ಕಡೆಗೆ ಮತ್ತಷ್ಟು ಬೆಳಕು ಚೆಲ್ಲುವ ದೃಷ್ಟಿಯಿಂದ ಅಧ್ಯಯನ ಯೋಗ್ಯವಾಗಿದೆ. ಅಲ್ಲದೆ, ವ್ಯಾಸಭಾರತದ ಭಗವದ್ಗೀತೆಯೊಂದಿಗೆ ತುಲನಾತ್ಮಕವಾಗಿ ಅವಲೋಕನ ನಡೆಸುವುದರಿಂದ ಇವುಗಳನ್ನು ರೂಪಿಸಿದ ಚಾರಿತ್ರಿಕ ಮತ್ತು ತಾತ್ವಿಕ ಒತ್ತಡಗಳನ್ನು ಗ್ರಹಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ, ಪ್ರಸ್ತುತ ಲೇಖನವು ವ್ಯಾಸಭಾರತದ ಗೀತೆ ಹಾಗೂ ಕುಮಾರವ್ಯಾಸ ಭಾರತದ ಗೀತೆಯನ್ನು ತೌಲನಿಕ ಅಧ್ಯಯನಕ್ಕೆ ಒಳಪಡಿಸುತ್ತದೆ.ಯುದ್ಧ ಬೇಡ ಎನ್ನಲು ಅರ್ಜುನನು ನೀಡುವ कारणಗಳನ್ನು ಚರ್ಚಿಸುತ್ತಾ ಜಾತಿಶಂಕರದ ಕುರಿತು ಕುಮಾರವ್ಯಾಸನ ಅರ್ಜುನನ ಮೌನವನ್ನು ಎತ್ತಿತೋರಿಸುತ್ತದೆ. ಮುಂದುವರಿದು, ಭಕ್ತಿ ಮೀಮಾಂಸೆಯ ನೆಲೆಯಿಂದ ಕೃಷ್ಣ-ಅರ್ಜುನರ ನಡುವಿನ ಸಂಭಾಷಣೆಯನ್ನು ಅವಲೋಕಿಸುತ್ತದೆ. ಅರ್ಜುನನ ವಿಷಾದವನ್ನು ಹೋಗಲಾಡಿಸಲು ಕೃಷ್ಣನಾಡುವ ಮಾತುಗಳನ್ನು, ಯುದ್ಧಕ್ಕೆ ನೀಡುವ ಸಮರ್ಥನೆಗಳನ್ನು ಚರ್ಚಿಸುತ್ತಾ, ಅರ್ಜುನನು ಕೃಷ್ಣನ ಬೋಧೆಗೆ ಶರಣಾಗತನಾಗುವ ಪ್ರಸಂಗವನ್ನೂ ತೌಲನಿಕ ವಿಮರ್ಶೆಗೆ ಒಳಪಡಿಸುತ್ತದೆ.ಕಾವ್ಯರಚನೆ ಮತ್ತು ತತ್ತ್ವಜಿಜ್ಞಾಸೆಯ ನಡುವಿನ ಬಿಕ್ಕಟ್ಟಿನ ಕ್ಷಣಗಳನ್ನು ಕುಮಾರವ್ಯಾಸ ಹೇಗೆ ನಿಭಾಯಿಸಿದ ಎನ್ನುವುದನ್ನು ಮನಗಾಣಿಸುತ್ತಾ, ಮುಂದೆ ಜನಪ್ರಿಯವಾಗಲಿದ್ದ ಕಾವ್ಯದ ವರ್ಣನಾತ್ಮಕ ಓಘಕ್ಕೆ ಗೀತೆಯನ್ನು ಹೇಗೆ ಕುಮಾರವ್ಯಾಸ ಸರಿದೂಗಿಸಿದ ಎನ್ನುವುದನ್ನೂ ತೋರಿಸಲಾಗಿದೆ.

How to Cite

ಅಮರ್‌ ಬಿ. ಹೊಳೆಗದ್ದೆ (2024). ಕುಮಾರವ್ಯಾಸ ಭಾರತದಲ್ಲಿ ಗೀತೋಪದೇಶ: ಒಂದು ತಾತ್ವಿಕ ವಿವೇಚನೆ. Aray Journal, 1(1), 7-16

Article Information

Article ID: ARY-0027
Code: ARY2026C032ADE3
Volume: Volume 1 (2024)
Issue: Issue 1
Article #: 4 of 5
Author: ಅಮರ್‌ ಬಿ. ಹೊಳೆಗದ್ದೆ
Published: 11 Jan 2024
Pages: 7-16
Views: 17
Downloads: 0
Status: Published

PDF Access: Restricted

You are not logged in.
Free access to 5 most recent articles.
This article is #20 of 38
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Subscribe to Aray Journal

Get unlimited access to all articles

Subscribe Now

PDF Access Restricted

This article is #20 of 38. Please login or subscribe for full access.

This article is in Issue #6 of 6 | Article #20 of 38

Aray Journal | Peer-Reviewed Research Journal

All rights reserved. Reproduction with proper citation is permitted.