Home > Articles > ಹೆಣ್ಣನ್ನು ಕಟಕಟೆಯಲ�...
✅ PDF Access Available Free Access Free Access (5 Articles)
Aray Journal | Research Article Published DOI: 10.xxxx/aray.2025.6 ARY20262DF6ED27
Volume 1 (2024) Issue 2 Article 9 of 9 Pages: 122-130

ಹೆಣ್ಣನ್ನು ಕಟಕಟೆಯಲ್ಲಿ ನಿಲ್ಲಿಸುವ ಚಿತ್ರಪಟ ರಾಮಾಯಣ

ಹೆಣ್ಣನ್ನು ಕಟಕಟೆಯಲ್ಲಿ ನಿಲ್ಲಿಸುವ ಚಿತ್ರಪಟ ರಾಮಾಯಣ

Author:

ಶ್ವೇತ ಜೆ.

Keywords:
ಚಿತ್ರಪಟ ರಾಮಾಯಣ ಜನಪದ ರಾಮಾಯಣ ಸೀತಾ ಪರಿತ್ಯಾಗ ಪಾತಿವ್ರತ್ಯ ಮಾತೃತ್ವ ಪಿತೃಸತ್ತಾತ್ಮಕತೆ ಸ್ತ್ರೀವಾದಿ ವಿಮರ್ಶೆ ಲೈಂಗಿಕ ನಿಷ್ಠೆ ಜನಪದ ಪ್ರಜ್ಞೆ ಸಾಂಸ್ಕೃತಿಕ ರಾಜಕಾರಣ ಹೆಣ್ಣಿನ ಪ್ರಾತಿನಿಧಿತ್ವ

Abstract

ಈ ಲೇಖನವು ಜನಪದದ ಚಿತ್ರಪಟ ರಾಮಾಯಣ ದೊಡ್ಡಾಟ ಪಠ್ಯವನ್ನು ಸ್ತ್ರೀವಾದಿ ದೃಷ್ಟಿಕೋನದಿಂದ ವಿಮರ್ಶಾತ್ಮಕವಾಗಿ ವಿಶ್ಲೇಷಿಸುತ್ತದೆ. ಸೀತಾ ಪರಿತ್ಯಾಗದ ಪ್ರಸಂಗವನ್ನು ಕೇಂದ್ರವಾಗಿಟ್ಟುಕೊಂಡು, ಜನಪದ ರಾಮಾಯಣ ಕಥನಗಳಲ್ಲಿ ಹೆಣ್ಣಿನ ಪಾತಿವ್ರತ್ಯ, ಮಾತೃತ್ವ, ಲೈಂಗಿಕ ನಿಷ್ಠೆ ಮತ್ತು ಪಿತೃಸತ್ತಾತ್ಮಕ ಮೌಲ್ಯಗಳು ಹೇಗೆ ನಿರ್ಮಾಣಗೊಂಡು ಪ್ರತಿಪಾದನೆಗೊಳ್ಳುತ್ತವೆ ಎಂಬುದನ್ನು ಅನಾವರಣಗೊಳಿಸುತ್ತದೆ. ವಿಶೇಷವಾಗಿ ಸೂರ್ಪನಖಿಯ ಪಾತ್ರದ ಮೂಲಕ ಸೀತೆಯ ಕುಟುಂಬ ಜೀವನವನ್ನು ಛಿದ್ರಗೊಳಿಸುವ ಕಥನ ವಿನ್ಯಾಸವನ್ನು ಇಲ್ಲಿ ಪರಿಶೀಲಿಸಲಾಗಿದೆ. ಈ ನಾಟಕದಲ್ಲಿ ರಾಮನನ್ನು ನಿರಪರಾಧಿಯನ್ನಾಗಿ ಹಾಗೂ ಸೀತೆಯನ್ನು ಪತಿವ್ರತೆಯ ಆದರ್ಶ ರೂಪವಾಗಿ ಚಿತ್ರಿಸುವ ಪ್ರಯತ್ನ ಕಂಡುಬರುತ್ತದೆ. ಅದೇ ಸಂದರ್ಭದಲ್ಲಿಸೂರ್ಪನಖಿಯರನ್ನು ಸಂಚುಗಾರ್ತಿ ಮತ್ತು ದುಷ್ಟ ಸ್ತ್ರೀಯ ಪ್ರತಿರೂಪವಾಗಿ ನಿರ್ಮಿಸಲಾಗಿದೆ. ಲೇಖನವು ಸೀತೆಯ ಮೇಲೆ ಹೊರಿಸಲಾದ ಅನುಮಾನ, ಅವಳ ಪಾತಿವ್ರತ್ಯದ ಅತಿರಂಜಿತ ಮಹಿಮೆ, ಬಂಜೆತನದ ಕುರಿತ ಸಾಮಾಜಿಕ ಪೂರ್ವಾಗ್ರಹಗಳು ಹಾಗೂ ಹೆಣ್ಣಿನ ಅಸ್ತಿತ್ವವನ್ನು ಮಾತೃತ್ವ ಮತ್ತು ಪತಿನಿಷ್ಠೆಯೊಂದಿಗೆ ಮಾತ್ರ ಗುರುತಿಸುವ ಮನೋವೃತ್ತಿಯನ್ನು ವಿಮರ್ಶಿಸುತ್ತದೆ. ನಾಟಕದ ವಿವಿಧ ಪ್ರಸಂಗಗಳ ವಿಶ್ಲೇಷಣೆಯ ಮೂಲಕ, ಜನಪದ ಪ್ರಜ್ಞೆಯು ಹೆಣ್ಣಿನ ಲೈಂಗಿಕತೆ ಮತ್ತು ನೈತಿಕತೆಯನ್ನು ನಿಯಂತ್ರಿಸುವ ಸಾಧನವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಲೇಖನ ತೋರಿಸುತ್ತದೆ. ಸೀತೆ ಮತ್ತು ಸೂರ್ಪನಖಿ ಎಂಬ ಎರಡು ವಿರೋಧಾತ್ಮಕ ಸ್ತ್ರೀ ಮಾದರಿಗಳನ್ನು ನಿರ್ಮಿಸುವ ಮೂಲಕ, ಹೆಣ್ಣನ್ನು ಸದಾ ಅಪರಾಧಿಯ ಸ್ಥಾನದಲ್ಲಿಯೇ ಕಾಣುವ ಪಿತೃಸತ್ತಾತ್ಮಕ ಜನಪದ ಮನೋಭಾವವನ್ನು ಈ ಲೇಖನ ಗುರುತಿಸುತ್ತದೆ. ಅಂತಿಮವಾಗಿ, ಚಿತ್ರಪಟ ರಾಮಾಯಣ ಪಠ್ಯವು ರಾಮನನ್ನು ರಕ್ಷಿಸುವ ಹಾಗೂ ಹೆಣ್ಣಿನ ಮೇಲೆಯೇ ದೋಷಾರೋಪಣೆಯನ್ನು ಕೇಂದ್ರೀಕರಿಸುವ ಸಾಂಸ್ಕೃತಿಕ ರಾಜಕಾರಣವನ್ನು ಪ್ರತಿನಿಧಿಸುತ್ತದೆ ಎಂಬ ನಿರ್ಣಯಕ್ಕೆ ಲೇಖನ ಬರುತ್ತದೆ.

ಸಾರಾಂಶ

ಈ ಲೇಖನವು ಜನಪದದ ಚಿತ್ರಪಟ ರಾಮಾಯಣ ದೊಡ್ಡಾಟ ಪಠ್ಯವನ್ನು ಸ್ತ್ರೀವಾದಿ ದೃಷ್ಟಿಕೋನದಿಂದ ವಿಮರ್ಶಾತ್ಮಕವಾಗಿ ವಿಶ್ಲೇಷಿಸುತ್ತದೆ. ಸೀತಾ ಪರಿತ್ಯಾಗದ ಪ್ರಸಂಗವನ್ನು ಕೇಂದ್ರವಾಗಿಟ್ಟುಕೊಂಡು, ಜನಪದ ರಾಮಾಯಣ ಕಥನಗಳಲ್ಲಿ ಹೆಣ್ಣಿನ ಪಾತಿವ್ರತ್ಯ, ಮಾತೃತ್ವ, ಲೈಂಗಿಕ ನಿಷ್ಠೆ ಮತ್ತು ಪಿತೃಸತ್ತಾತ್ಮಕ ಮೌಲ್ಯಗಳು ಹೇಗೆ ನಿರ್ಮಾಣಗೊಂಡು ಪ್ರತಿಪಾದನೆಗೊಳ್ಳುತ್ತವೆ ಎಂಬುದನ್ನು ಅನಾವರಣಗೊಳಿಸುತ್ತದೆ. ವಿಶೇಷವಾಗಿ ಸೂರ್ಪನಖಿಯ ಪಾತ್ರದ ಮೂಲಕ ಸೀತೆಯ ಕುಟುಂಬ ಜೀವನವನ್ನು ಛಿದ್ರಗೊಳಿಸುವ ಕಥನ ವಿನ್ಯಾಸವನ್ನು ಇಲ್ಲಿ ಪರಿಶೀಲಿಸಲಾಗಿದೆ. ಈ ನಾಟಕದಲ್ಲಿ ರಾಮನನ್ನು ನಿರಪರಾಧಿಯನ್ನಾಗಿ ಹಾಗೂ ಸೀತೆಯನ್ನು ಪತಿವ್ರತೆಯ ಆದರ್ಶ ರೂಪವಾಗಿ ಚಿತ್ರಿಸುವ ಪ್ರಯತ್ನ ಕಂಡುಬರುತ್ತದೆ. ಅದೇ ಸಂದರ್ಭದಲ್ಲಿಸೂರ್ಪನಖಿಯರನ್ನು ಸಂಚುಗಾರ್ತಿ ಮತ್ತು ದುಷ್ಟ ಸ್ತ್ರೀಯ ಪ್ರತಿರೂಪವಾಗಿ ನಿರ್ಮಿಸಲಾಗಿದೆ. ಲೇಖನವು ಸೀತೆಯ ಮೇಲೆ ಹೊರಿಸಲಾದ ಅನುಮಾನ, ಅವಳ ಪಾತಿವ್ರತ್ಯದ ಅತಿರಂಜಿತ ಮಹಿಮೆ, ಬಂಜೆತನದ ಕುರಿತ ಸಾಮಾಜಿಕ ಪೂರ್ವಾಗ್ರಹಗಳು ಹಾಗೂ ಹೆಣ್ಣಿನ ಅಸ್ತಿತ್ವವನ್ನು ಮಾತೃತ್ವ ಮತ್ತು ಪತಿನಿಷ್ಠೆಯೊಂದಿಗೆ ಮಾತ್ರ ಗುರುತಿಸುವ ಮನೋವೃತ್ತಿಯನ್ನು ವಿಮರ್ಶಿಸುತ್ತದೆ. ನಾಟಕದ ವಿವಿಧ ಪ್ರಸಂಗಗಳ ವಿಶ್ಲೇಷಣೆಯ ಮೂಲಕ, ಜನಪದ ಪ್ರಜ್ಞೆಯು ಹೆಣ್ಣಿನ ಲೈಂಗಿಕತೆ ಮತ್ತು ನೈತಿಕತೆಯನ್ನು ನಿಯಂತ್ರಿಸುವ ಸಾಧನವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಲೇಖನ ತೋರಿಸುತ್ತದೆ. ಸೀತೆ ಮತ್ತು ಸೂರ್ಪನಖಿ ಎಂಬ ಎರಡು ವಿರೋಧಾತ್ಮಕ ಸ್ತ್ರೀ ಮಾದರಿಗಳನ್ನು ನಿರ್ಮಿಸುವ ಮೂಲಕ, ಹೆಣ್ಣನ್ನು ಸದಾ ಅಪರಾಧಿಯ ಸ್ಥಾನದಲ್ಲಿಯೇ ಕಾಣುವ ಪಿತೃಸತ್ತಾತ್ಮಕ ಜನಪದ ಮನೋಭಾವವನ್ನು ಈ ಲೇಖನ ಗುರುತಿಸುತ್ತದೆ. ಅಂತಿಮವಾಗಿ, ಚಿತ್ರಪಟ ರಾಮಾಯಣ ಪಠ್ಯವು ರಾಮನನ್ನು ರಕ್ಷಿಸುವ ಹಾಗೂ ಹೆಣ್ಣಿನ ಮೇಲೆಯೇ ದೋಷಾರೋಪಣೆಯನ್ನು ಕೇಂದ್ರೀಕರಿಸುವ ಸಾಂಸ್ಕೃತಿಕ ರಾಜಕಾರಣವನ್ನು ಪ್ರತಿನಿಧಿಸುತ್ತದೆ ಎಂಬ ನಿರ್ಣಯಕ್ಕೆ ಲೇಖನ ಬರುತ್ತದೆ.

How to Cite

ಶ್ವೇತ ಜೆ. (2026). ಹೆಣ್ಣನ್ನು ಕಟಕಟೆಯಲ್ಲಿ ನಿಲ್ಲಿಸುವ ಚಿತ್ರಪಟ ರಾಮಾಯಣ. Aray Journal, 2(6), 122-130. DOI: 10.xxxx/aray.2025.6

Article Information

Article ID: ARY-0089
Code: ARY20262DF6ED27
Volume: Volume 1 (2024)
Issue: Issue 2
Article #: 9 of 9
Author: ಶ್ವೇತ ಜೆ.
Published: 29 Jul 2026
DOI: 10.xxxx/aray.2025.6
Pages: 122-130
Views: 20
Downloads: 0
Status: Published

PDF Access: Granted

You are not logged in.
Free access to 5 most recent articles.
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Full Article PDF

ಹೆಣ್ಣನ್ನು ಕಟಕಟೆಯಲ್ಲಿ ನಿಲ್ಲಿಸುವ ಚಿತ್ರಪಟ ರಾಮಾಯಣ
PDF Document | 29 Jul 2026 | Free Access

Loading PDF...

Aray Journal | Peer-Reviewed Research Journal

All rights reserved. Reproduction with proper citation is permitted.