ಆರ್ಥಿಕತೆಯ ಶಿವತಾಂಡವ: ‘ಸೃಜನಾತ್ಮಕ ವಿನಾಶ’ ಸಿದ್ಧಾಂತಕ್ಕೆ 2025ರ ನೋಬೆಲ್ ಗೌರವ
ಆರ್ಥಿಕತೆಯ ಶಿವತಾಂಡವ: ‘ಸೃಜನಾತ್ಮಕ ವಿನಾಶ’ ಸಿದ್ಧಾಂತಕ್ಕೆ 2025ರ ನೋಬೆಲ್ ಗೌರವ
ಸಾವಿತ್ರಿ ಹಿರೇಮಠ, ಶಿಗ್ಗಾಂವಿ
ಬಸವ ನಿಲಯ, ಶಿವಗಿರಿ, ಜಯನಗರ ಲೇಕ್ ಪಾರ್ಕ್ ಹತ್ತಿರ, ಧಾರವಾಡ 580007
Abstract
‘ಆರ್ಥಿಕತೆಯ ಶಿವತಾಂಡವ : ಸೃಜನಾತ್ಮಕ ವಿನಾಶ ಸಿದ್ಧಾಂತಕ್ಕೆ ನೋಬೆಲ್ ಗೌರವ’ ಎಂಬ ಲೇಖನವು ಅರ್ಥಶಾಸ್ತ್ರದ ‘ಸೃಜನಾತ್ಮಕ ವಿನಾಶ’ (Creative Destruction) ಎಂಬ ಸಿದ್ಧಾಂತಕ್ಕೆ ಮೂಲವಾದ ಸಂಗತಿ ಯಾವುದು ಮತ್ತು ಅದು ಯಾವ ರೀತಿ ಬೆಳವಣಿಗೆ ಹೊಂದಿತು ಎಂಬುದನ್ನು ಖಚಿತವಾಗಿ ನಿರೂಪಿಸುವುದರ ಜೊತೆಗೆ ಅದರ ಪ್ರಸ್ತುತತೆಯನ್ನು ಸಾಹಿತ್ಯಿಕ ಭಾಷೆಯ ಮೂಲಕ ನಿರೂಪಿಸುವ ಪ್ರಯತ್ನವಾಗಿದೆ.ಮುಖ್ಯ ಉದ್ದೇಶಗಳು:ಸಮಕಾಲೀನ ಜಗತ್ತು ಎದುರಿಸುತ್ತಿರುವ ತಾಂತ್ರಿಕ ಪಲ್ಲಟಗಳನ್ನು ಅರ್ಥೈಸಿಕೊಳ್ಳುವುದು.ಅಗತ್ಯ ಯಂತ್ರಾಂಶದ ಜೊತೆಗೆ ತಂತ್ರಾಂಶಗಳ ಸ್ಥಿತ್ಯಂತರಗಳನ್ನು ಅರಿತು ಅನ್ವಯಿಸಿಕೊಳ್ಳುವುದು.ಹಿಂದೂ ಪುರಾಣದ ಶಿವತಾಂಡವ ನೃತ್ಯಕ್ಕೂ ಮತ್ತು ಜೋಸೆಫ್ ಶಂಪೀಟರ್ನ ಸೃಜನಾತ್ಮಕ ವಿನಾಶ ತತ್ವಕ್ಕೂ ಇರುವ ಸಾಮ್ಯತೆಯನ್ನು ಅರಿಯುವುದು.ಅಗತ್ಯವೇ ಆವಿಷ್ಕಾರದ ತಾಯಿ ಎಂಬಂತೆ ನಾವೀನ್ಯತೆಯೇ ಬದುಕುವ ದಾರಿ ಎಂಬುದನ್ನು ತಿಳಿಯುವುದು.ಸಿದ್ಧ ಮಾದರಿಗಳನ್ನು ವಿನಾಶಿಸಿ ಹೊಸ ಸೃಷ್ಟಿಯಲ್ಲಿರುವ ಸವಾಲುಗಳನ್ನು ಸ್ವೀಕರಿಸುವ ಬಗೆಯನ್ನು ತಿಳಿಯುವುದು.ವಿಶ್ಲೇಷಣಾತ್ಮಕ ಮುಕ್ತಾಯ:ಒಟ್ಟಾರೆಯಾಗಿ ‘ಸೃಜನಾತ್ಮಕ ವಿನಾಶ’ ಸಿದ್ಧಾಂತದ ಮೂಲವು ಹಿಂದೂ ಪುರಾಣದಲ್ಲಿ ಮೊದಲಗೊಂಡು, ಸಾಹಿತ್ಯ, ತತ್ತ್ವಶಾಸ್ತ್ರದಿಂದ ಹಾಯ್ದುಕೊಂಡು ಆರ್ಥಿಕ ಸಿದ್ಧಾಂತದವರೆಗೆ ತಲುಪಿ ಪ್ರತಿಷ್ಠಿತ ನೋಬೆಲ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಭೂತಕಾಲದ ಸಂಗತಿ ವರ್ತಮಾನದಲ್ಲಿ ಪ್ರಸ್ತುತಗೊಂಡು ಭವಿಷ್ಯಕ್ಕೆ ನಾಂದಿಯಾಗುತ್ತಿರುವುದು ಮಹತ್ವದ ಸಂಗತಿಯಾಗಿದೆ. ‘ಸಾವಿನಲಿ ಹೊಸಬಾಳು ಹುದುಗಿಹುದು; ನಾಶದಲಿ ನವಸೃಷ್ಟಿ ಪವಡಿಸಿದೆ’ ಎಂಬ ಕುವೆಂಪುರವರ ಸಾಲು ಇಲ್ಲಿ ಅತ್ಯಂತ ಪ್ರಸ್ತುತವೆನಿಸುತ್ತದೆ.
ಸಾರಾಂಶ
How to Cite
ಸಾವಿತ್ರಿ ಹಿರೇಮಠ, ಶಿಗ್ಗಾಂವಿ (2026). ಆರ್ಥಿಕತೆಯ ಶಿವತಾಂಡವ: ‘ಸೃಜನಾತ್ಮಕ ವಿನಾಶ’ ಸಿದ್ಧಾಂತಕ್ಕೆ 2025ರ ನೋಬೆಲ್ ಗೌರವ. Aray Journal, 2(5), 59-65. DOI: 10.xxxx/aray.2025.5
Article Information
PDF Access: Restricted
You are not logged in.
Free access to 5 most recent articles.
This article is #11 of 38
Login →
Subscription Plans
PDF Access Restricted
This article is #11 of 38. Please login or subscribe for full access.
This article is in Issue #2 of 6 | Article #11 of 38
Aray Journal | Peer-Reviewed Research Journal
All rights reserved. Reproduction with proper citation is permitted.